ಬೋನ್ಸಾಯ್

ತಾಯಿ ನೆಲವ ಒಮ್ಮೆಯೂ ಸೋಕದೆ
ಬಣ್ಣ ಬಣ್ಣದ ಬೋಗುಣಿಗಳಲ್ಲಿ ಬೆಳೆದು
ಅಲ್ಲಲ್ಲ, ಷೋಕಿಗೆ ಶಿಸ್ತಿನಿಂದ ಬೆಳೆಸಲ್ಪಟ್ಟು
ತಾಯಿಬೇರೂ ಕತ್ತರಿಸಿಕೊಂಡು

ಅತ್ತಿತ್ತ ಎಲ್ಲೆಂದರಲ್ಲಿ ಕೊಂಬೆ ಚಾಚದೇ
ಜೈಲಿನ ಖೈದಿಯಂತೆ
ಇದ್ದೂ ತಿನ್ನಲಾಗದ ರೋಗಿಷ್ಟ ಶ್ರೀಮಂತನಂತೆ
ಒಂದೇ ಗುಟುಕು ಅನ್ನ ನೀರು
ಮೇಲಿಲ್ಲ ಪುಷ್ಟಿಭರಿತ ಖೀರು.

ಇಷ್ಟಿಷ್ಟೇ ಎಂದು ಅಳತೆ ಮಾಡಿ
ತಲೆ-ಬಾಲ ಬೋಳಿಸಿಕೊಂಡು
ಕುಟುಕು ಜೀವ ಹಿಡಿದು

ಯಾರ್‍ಯಾರಿಗೆ ಎಷ್ಟೆಷ್ಟೋ
ಹೂ-ಹಣ್ಣು-ನೆರಳು ಕೊಡಬಹುದಿದ್ದ
ದೈತ್ಯ ಮರ,
ಈಗ ದೀನವಾಗಿ ನಿಂತು
ಒಂದೊಂದೇ ಹೂ ಹಣ್ಣು ಹಡೆಯುತ್ತದೆ
ಆಗೆಲ್ಲೋ ಈಗೆಲ್ಲೋ!
ಅದರ ಮೇಲೇ ಎಲ್ಲರ ಅಚ್ಚರಿಯ ಕಣ್ಣು!

ವಿಶ್ವಸುಂದರಿ ಸ್ಪರ್ಧೆಗೆ
ಡಯಟ್ ಮಾಡಿ
ಸ್ಲಿಮ್ ಆಗಿ ಟ್ರಿಮ್ ಮಾಡಿಸಿಕೊಂಡು ಬೆಳೆದ
ವಯಸ್ಸು ಮೀರಿದ
ಬುಡ್ಡ ಅಂಗವಿಕಲ ಸುಂದರಿ
ಬೋನ್ಸಾಯ್ ರಾಣಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿಂತಕ
Next post ಸಾವಿಲ್ಲದ ಮಂತ್ರವಾದಿ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

cheap jordans|wholesale air max|wholesale jordans|wholesale jewelry|wholesale jerseys